ಬುರುಡೇ ಬುರುಡೇ… ಸಿಎಂ-ಈಶ್ವರಪ್ಪಗೆ ಟೀಕೆ ಮಾಡಲು ಸಿಕ್ಕಿದೆ ಹೊಸ ವಿಷಯ

ಶುಕ್ರವಾರ, 9 ಮಾರ್ಚ್ 2018 (09:06 IST)
ಬೆಂಗಳೂರು: ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಆಗಾಗ ಟೀಕಾ ಪ್ರಹಾರ ನಡೆಸುವುದು ಹೊಸತೇನಲ್ಲ. ಆದರೆ ಇದೀಗ ಇವರಿಬ್ಬರ ನಡುವೆ ಬುರುಡೆ ವಿಚಾರವಾಗಿ ಕೆಸರೆರಚಾಟ ನಡೆಯುತ್ತಿದೆ.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಟೀಕೆ ಮಾಡುವಾಗ ಸಿಎಂ ಸಿದ್ದರಾಮಯ್ಯ ಕೊಲೆಯಾಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಈಶ್ವರಪ್ಪಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ ಈಶ್ವರಪ್ಪಗೆ ತಲೆ ಮತ್ತು ಮೆದುಳಿಗೆ ಕನೆಕ್ಷನ್ ತಪ್ಪಿ ಎಷ್ಟೋ ದಿನ ಆಗಿದೆ. ಅವರು ಮಾತಾಡುವುದಕ್ಕೆ ತಲೆಬುಡವಿಲ್ಲ ಎಂದಿದ್ದರು.

ಇದಕ್ಕೆ ತಿರುಗೇಟು ಕೊಟ್ಟ ಈಶ್ವರಪ್ಪ ಸಿಎಂ ತಲೆಯಲ್ಲಿ ಗೊಬ್ಬರ ತುಂಬಿಕೊಂಡಿದೆ. ಅವರಿಗೆ ಮೆದುಳೇ ಇಲ್ಲ ಎಂದಿದ್ದಾರೆ. ಈ ರೀತಿ ಇಬ್ಬರೂ ನಾಯಕರು ಬುರುಡೆ ವಿಚಾರವಾಗಿ ಕಿತ್ತಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ