ಕೆಂಪಯ್ಯರನ್ನು ಈ ಸರ್ಕಾರ ಇಟ್ಟುಕೊಂಡಿರೋದೇ ಹಣ ಸಾಗಣೆಗೆ: ಕುಮಾರಸ್ವಾಮಿ ಆರೋಪ
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದು ತಿಂಗಳಾದ ಮೇಲೆ ಜನರೇ ಇವರನ್ನು ಖಾಲಿ ಮಾಡಿಸ್ತಾರೆ. ಅಂತಹದ್ದರಲ್ಲಿ ಮುಖ್ಯ ಕಾರ್ಯದರ್ಶಿಗಳ ಅವಧಿ ವಿಸ್ತರಿಸುವ ಅಗತ್ಯವಿತ್ತೇ? ರಾಜ್ಯದಲ್ಲಿ ಬೇರೆ ಅಧಿಕಾರಿಗಳಿಗೆ ಬರವೇ?’ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಸರ್ಕಾರ ಅಧಿಕಾರಿಗಳಿಗೆ ನಿರ್ಭೀತೆಯಿಂದ ಕೆಲಸ ಮಾಡಲು ಬಿಡುತ್ತಿಲ್ಲ. ಸದಾ, ಒತ್ತಡ, ಭಯದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.