ಬಿಜೆಪಿಯ ಮಹಾ ಮೋಸಕ್ಕೆ ಕುಮಾರಸ್ವಾಮಿ ಹರಕೆಯ ಕುರಿ: ದಿನೇಶ್ ಗುಂಡೂರಾವ್ ವ್ಯಂಗ್ಯ

Sampriya

ಶನಿವಾರ, 3 ಆಗಸ್ಟ್ 2024 (20:22 IST)
ಬೆಂಗಳೂರು: ಬಿಜೆಪಿ ಇಂದು ನಡೆಸಿರುವ ಮೈಸೂರು ಚಲೋ ಪಾದಯಾತ್ರೆ ನಮ್ಮ ಸರ್ಕಾರದ ವಿರುದ್ಧವೋ ಅಥವಾ ಜೆಡಿಎಸ್‌ ವಿರುದ್ಧವೋ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು,  ಹಳೇ ಮೈಸೂರು ಪ್ರಾಂತ್ಯದಲ್ಲಿ ಬಲಿಷ್ಠವಾಗಿರುವ ಜೆಡಿಎಸ್ ಮತಬುಟ್ಟಿಗೆ ಕೈ ಹಾಕಲು ಬಿಜೆಪಿ ನಾಯಕರು ಮಾಡುತ್ತಿರುವ ಮಹಾ ಸಂಚು ಇದಾಗಿದ್ದು, ಈ ವಿಚಾರ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಅರ್ಥ ಆಗುತ್ತಿಲ್ಲ ಎಂದಿದ್ದಾರೆ.

ಬಿಜೆಪಿ ಅವರು ಮಹಾ ಮೋಸದ ಜಾಲಕ್ಕೆ ಕುಮಾರಸ್ವಾಮಿಯವರು ಹರಕೆಯ ಕುರಿಯಂತೆ ತಲೆ ಕೊಡುತ್ತಿದ್ದಾರೆ.

ಜೆಡಿಎಸ್‌ ಪಕ್ಷವನ್ನೇ ಅಪೋಷನ ತೆಗೆದುಕೊಳ್ಳಲು ನಡೆಸುತ್ತಿರುವ ಬಿಜೆಪಿಯವರ ಷಡ್ಯಂತ್ರಕ್ಕೆ ವೀಳ್ಯ ಕೊಟ್ಟು ಸತ್ಕರಿಸುತ್ತಿರುವ ಕುಮಾರಸ್ವಾಮಿಯವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ. .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ