‘ಕುಮಾರಸ್ವಾಮಿಯದ್ದು ಹಿಟ್ ಅಂಡ್ ರನ್ ಕೇಸ್’

ಮಂಗಳವಾರ, 16 ಜುಲೈ 2019 (13:18 IST)
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಹಿಟ್ ಅಂಡ್ ರನ್ ಕೇಸ್ ಥರ ನಡೆದುಕೊಳ್ಳುತ್ತಿದ್ದಾರೆ. ಹೀಗಂತ ಬಿಜೆಪಿ ಶಾಸಕ ಟೀಕೆ ಮಾಡಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೋಷನ್ ಬೇಗ್ ಜೊತೆಗೆ ಬಿ.ಎಸ್.ಯಡಿಯೂರಪ್ಪನವರ ಆಪ್ತ ಸಂತೋಷ ಇರಲೇ ಇಲ್ಲ. ಸಿ.ಪಿ.ಯೋಗೀಶ್ವರ್  ಅವರೂ ಇದ್ದಿದ್ದಿಲ್ಲ. ಆದರೂ ರಾಜಕೀಯ ಪ್ರೇರಿತವಾಗಿ ಕುಮಾರಸ್ವಾಮಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗಂತ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ದೂರಿದ್ದಾರೆ.

ಬಿಜೆಪಿಗೂ ಹಾಗೂ ರೋಷನ್ ಬೇಗ್ ಅವರಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ಯಾವ ವಿಮಾನವನ್ನೂ ಬುಕ್ಕಿಂಗ್ ಮಾಡಿಲ್ಲ ಎಂದ್ರು.

ಬಿಜೆಪಿ ವಿರುದ್ಧ ಕುಮಾರಸ್ವಾಮಿ ದ್ವೇಷಪೂರಿತ ನಡೆ ತೋರಿಸುತ್ತಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.

ಗುರುವಾರ ನಡೆಯಲಿರೋ ವಿಶ್ವಾಸಮತ ಯಾಚನೆಗೆ ಬಿಜೆಪಿಯ ಹಾಗೂ ಪಕ್ಷೇತರರಿಬ್ಬರು ಸೇರಿ ಒಗ್ಗಟ್ಟಾಗಿ ವಿಧಾನಸೌಧಕ್ಕೆ ಹೋಗ್ತೇವೆ ಅಂತ ಶಾಸಕ ವಿಶ್ವನಾಥ್ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ