ಹರಕೆ ತೀರಿಸಿದ ಭಕ್ತ… ಚಾಮುಂಡೇಶ್ವರಿ ಗರ್ಭಗುಡಿಗೆ ಚಿನ್ನದಪಟ್ಟಿ ಬಾಗಿಲು

ಶನಿವಾರ, 28 ಅಕ್ಟೋಬರ್ 2017 (18:06 IST)
ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲಿಗೆ ಚಿನ್ನದ ಪಟ್ಟಿ ಬಾಗಿಲು ಅರ್ಪಿಸಲು ಹರಕೆ ಹೊತ್ತಿದ್ದ ಭಕ್ತರು ತಮ್ಮ ಹರಕೆ ಪೂರ್ತಿ ಮಾಡಿದ್ದಾರೆ.

ಬೆಂಗಳೂರು ಮೂಲದ ವಕೀಲ ಜಯಶ್ರೀ ಶ್ರೀಧರ್ ಅವರು, ತಾಯಿ ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲಿಗೆ ಕೋಟ್ಯಂತರ ಮೌಲ್ಯದ ನವದುರ್ಗೆಯರಿರುವ ಚಿನ್ನದ ಪಟ್ಟಿ ಬಾಗಿಲನ್ನು ಅರ್ಪಿಸಿದ್ದಾರೆ. ಅಲ್ಲದೆ ಶುಕ್ರವಾರ ವಿಶೇಷ ಪೂಜೆ ಮಾಡಿಸಿದ್ದಾರೆ.

ಚಾಮುಂಡೇಶ್ವರಿ ಬಳಿ ಹರಕೆ ಹೊತ್ತಿಕೊಂಡಿದ್ದ ಜಯಶ್ರೀ ಶ್ರೀಧರ್, ಬಾಗಿಲು ಮಾಡಿಸಲು 2 ವರ್ಷದ ಹಿಂದೆ ಅನುಮತಿ ಪಡೆದುಕೊಂಡಿದ್ದರು. ನವದುರ್ಗೆಯರಿರುವ ಚಿನ್ನದ ಪಟ್ಟಿ ಬಾಗಿಲು ಸಂಪೂರ್ಣಗೊಂಡ ನಂತರ ದೇವಸ್ಥಾನ ಗರ್ಭಗುಡಿ ಬಾಗಿಲಿಗೆ ಅರ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ