ಮನೆ ಮುಂದಿದ್ದ ಸಾಕು ನಾಯಿಯನ್ನೇ ತಿಂದ ಚಿರತೆ : ಬೆಚ್ಚಿ ಬಿದ್ದ ಜನರು

ಸೋಮವಾರ, 28 ಅಕ್ಟೋಬರ್ 2019 (18:18 IST)
ಮನೆ ಹತ್ತಿರ ಬಂದು ಸಾಕು ನಾಯಿಯನ್ನು  ಚಿರತೆಯೊಂದು ತಿಂದು ಹಾಕಿರೋದಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. 

ಮಂಡ್ಯ ಸಮೀಪದ ದೊರೆನಹಳ್ಳಿ ಗ್ರಾಮದ ರೈತ ಲೋಕೇಶ್ ರವರ ಮನೆ ಹತ್ತಿರ  ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಚಿರತೆಯೊಂದು ಕೊಂದು ಹಾಕಿದೆ.

ಸಂಜೆ  7 ಗಂಟೆಗೆ ಘಟನೆ ನಡೆದಿರೋದು ಸಿ ಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಮುಸ್ಸಂಜೆ ವೇಳೆಯೇ ಚಿರತೆ ಮನೆ ಮುಂದೆ ಪ್ರತ್ಯಕ್ಷವಾಗಿರೋದು ಜನತೆಯಲ್ಲಿ ತೀವ್ರ ಭಯಕ್ಕೆ ಕಾರಣವಾಗಿದೆ.  

ಕಳೆದ ಐದು ತಿಂಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಹಲವಾರು ಬಾರಿ ಸಾಕು ನಾಯಿಗಳನ್ನು ತಿಂದು ಹಾಕಿದೆ. ಇದರ
ಬಗ್ಗೆ  ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಯಾವುದೇ ಕ್ರಮದ ತೆಗೆದುಕೊಳ್ಳುತ್ತಿಲ್ಲ.

ಇದರಿಂದ ರಾತ್ರಿ ವೇಳೆ ಮನೆ ಇಂದ ಹೊರಗೆ ಬರುವುದೇ ಕಷ್ಟವಾಗಿದೆ.  ಕೂಡಲೇ ಅರಣ್ಯ ಇಲಾಖೆಯವರು ಚಿತೆಯನ್ನು ಸೆರೆ ಹಿಡಿಯುವ ಕೆಲಸ ಮಾಡಬೇಕು. ಹೀಗಂತ ಅಲ್ಲಿನ ಜನರು ಒತ್ತಾಯ ಮಾಡ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ