ಚಿರತೆ ಭೀತಿ : ಮೇಟಗಳ್ಳಿ ಸುತ್ತಮುತ್ತಲ ಶಾಲೆಗಳಿಗೆ ರಜೆ

ಶುಕ್ರವಾರ, 9 ಸೆಪ್ಟಂಬರ್ 2022 (14:19 IST)
ಮೈಸೂರು : ಬೆಳಗಾವಿ ಆಯ್ತು ಇದೀಗ ಮೈಸೂರಿಗೆ ಚಿರತೆ ಭೀತಿ ಶುರುವಾಗಿದೆ. ಮೈಸೂರಿನ ಆರ್.ಬಿ.ಐ. ನೌಕರರಿಗೆ ಚಿರತೆ ಕಾಟ ಬಹಳ ಜಾಸ್ತಿಯಾಗಿದೆ.
 
ಕಳೆದ 2 ವಾರದಿಂದ ಚಿರತೆ ಫ್ಯಾಮಿಲಿಯ ಓಡಾಟ ಹೆಚ್ಚಾಗಿದ್ದು ಆರ್.ಬಿ.ಐ. ನೌಕರರು, ಕುಟುಂಬಸ್ಥರು ಭಯಭೀತರಾಗಿದ್ದಾರೆ. ಮೈಸೂರಿನ ಹೊರ ವಲಯದ ಮೇಟಗಳ್ಳಿಯ ನೋಟು ಮುದ್ರಣಾಲಯ ಸುತ್ತ ಚಿರತೆ ಫ್ಯಾಮಿಲಿ ಬೀಡು ಬಿಟ್ಟಿದೆ. 

ಎರಡು ಮರಿಗಳೊಂದಿಗೆ ತಾಯಿ ಚಿರತೆ ಸಂಚಾರ ಮಾಡುತ್ತಿದ್ದು, ಚಿರತೆ ಕಂಡು ನೌಕರರು ಕಂಗೆಟ್ಟಿದ್ದಾರೆ. ಬೀದಿ ನಾಯಿಗಳನ್ನು ಎಳೆದೊಯ್ದಿರುವ ಚಿರತೆ,

ದಿನದಿಂದ ದಿನಕ್ಕೆ ಈ ಭಾಗದಲ್ಲಿ ನಾಯಿಗಳು ಕಡಮೆಯಾಗುತ್ತಿದ್ದು ಜನರು ಮನೆಯಿಂದ ಹೊರಗೆ ಬರಲೂ ಹೆದರುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿರೋ ಕೇಂದ್ರೀಯ ವಿದ್ಯಾಲಯಕ್ಕೆ ವಾರದಿಂದ ರಜೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ