ಕಣ್ಣೀರಿಟ್ಟ ಡಿಸಿಎಂ ಅಧಿಕಾರ ಬಿಡಲಿ ಎಂದ ಡಿ.ಕೆ.ಶಿ

ಶನಿವಾರ, 17 ಅಕ್ಟೋಬರ್ 2020 (19:53 IST)

ಕೊರೊನಾ ಹಾಗೂ ವಯಸ್ಸಿನ ಕಾರಣದಿಂದಾಗಿ ಕಣ್ಣೀರು ಹಾಕಿರುವ ಡಿಸಿಎಂ ಗೋವಿಂದ ಕಾರಜೋಳರಿಗೆ ಕೆಪಿಸಿಸಿ ಅಧ್ಯಕ್ಷ ಟಾಂಗ್ ನೀಡಿದ್ದಾರೆ.
 

ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ತೀವ್ರ ತೊಂದರೆಯಲ್ಲಿ ಸಿಲುಕಿದ್ದಾರೆ.

 

ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಲು ಸಾಧ್ಯ ಆಗದಿದ್ದಲ್ಲಿ ಅಧಿಕಾರ ಬಿಟ್ಟು ಮನೆ ಸೇರಿಕೊಳ್ಳಲಿ ಎಂದು ಡಿಸಿಎಂ ಕಾರಜೋಳರಿಗೆ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸ್ವಂತ ಹಿತಕ್ಕಾಗಿ ಸಚಿವರು ಜನರ ಹಿತ ಬಲಿಕೊಡುತ್ತಿದ್ದಾರೆ ಎಂದು ಡಿ.ಕೆ.ಶಿ ದೂರಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ