ಎಸ್ಸೆಂ ಕೃಷ್ಣ ಬಿಜೆಪಿ ಪರ ಪ್ರಚಾರ ಮಾಡಲಿ, ಉಪಚುನಾವಣೆಯಲ್ಲಿ ಗೆಲ್ಲೋದು ನಾವೇ: ಸಿಎಂ ಸಿದ್ಧರಾಮಯ್ಯ

ಶುಕ್ರವಾರ, 24 ಮಾರ್ಚ್ 2017 (11:56 IST)
ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಬಿಜೆಪಿ ಪರವಾಗಿಯೇ ಪ್ರಚಾರ ಮಾಡಲಿ. ಅದು ಸಹಜ. ಆದರೆ ಚುನಾವಣೆ ಗೆಲ್ಲೋದು ನಾವೇ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

 

ಎಸ್ ಎಂ ಕೆ ಬಿಜೆಪಿ ಪರ ಪ್ರಚಾರ ಮಾಡಿದರೆ ಅದರಲ್ಲಿ ಹೆಚ್ಚುಗಾರಿಕೆ ಏನಿದೆ? ಬಿಎಸ್ ವೈ ಹಗಲು ಕನಸು ಕಾಣುತ್ತಿದ್ದಾರೆ. ಮಿಷನ್ 150 ಎನ್ನುತ್ತಿದ್ದಾರೆ.  ಅದು ಸಾಧ್ಯನಾ? ಬಿಜೆಪಿ ಗೆಲ್ಲುತ್ತದೆಂಬ ಭ್ರಮೆಯಲ್ಲಿದ್ದಾರೆ ಎಂದು ಸಿಎಂ ಲೇವಡಿ ಮಾಡಿದ್ದಾರೆ.

 
ಅತ್ತ ಉಪ ಚುನಾವಣೆಗಾಗಿ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಪ್ರಮುಖ ನಾಯಕರು ಇಲ್ಲಿಯೇ ಬೀಡುಬಿಟ್ಟಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ