ಯಾವುದೇ ರೀತಿ ತನಿಖೆ ನಡೆಸಲಿ - ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಮಂಗಳವಾರ, 30 ಮೇ 2023 (20:32 IST)
ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರವಾಗಿ ಯಾವುದೇ ಕಂಪ್ಲೆಂಟ್ ಇರಲಿ, ದೂರು ಇರಲಿ ಯಾವುದೇ ತನಿಖೆ ಮಾಡಬಹುದು .ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ,ಸಿಐಡಿ ತನಿಖೆಗೆ ನಾನೆ ಹಿಂದೆ ದೂರು ನೀಡಿದ್ದೆ.ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆ FIR ಆಗಿರಲಿಲ್ಲ.ಹೊಸ ಸರ್ಕಾರ ಬಂದಿದೆ ಯಾವುದೇ ರೀತಿ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ತನಿಖೆ ಪಾರದರ್ಶಕವಾಗಿರಲಿ.ಎದುರಿಸಲು ನಾವು ಸಿದ್ದ.ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು.ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು. ಅಂತಾ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ