ದಲಿತರ ಮನೆಗೆ ಪೇಜಾವರ ಶ್ರೀ ಭೇಟಿಯ ಕಾರಣ ತಿಳಿಸಿದ ಲಿಂಗಾಯತ ಸ್ವಾಮೀಜಿ

ಶನಿವಾರ, 13 ಜನವರಿ 2018 (20:42 IST)
ವೈದಿಕತೆ, ಬ್ರಾಹ್ಮಣತ್ವ ಹಾಗೂ ರಾಜಕೀಯ ಉಳಿಸಿಕೊಳ್ಳಲು ಉಡುಪಿಯ ಪೇಜಾವರ ಶ್ರೀಗಳು ದಲಿತರ ಮನೆಗಳಿಗೆ ಹೋಗುತ್ತಾರೆ ಎಂದು ಲಿಂಗಾಯತ ಸಮಾಜದ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಲಿಂಗಾಯತ ಸ್ವಾಮೀಜಿಗಳು ಫ್ಯಾಷನಗಾಗಿ ದಲಿತರ ಮನೆಗೆ ಹೊಗುತ್ತಿಲ್ಲ, ಬಸವಣ್ಣ ವೈಶ್ಯರನ್ನ ಅಪ್ಪಿಕೊಂಡಿದ್ದಾರೆ. ದಲಿತರು ದೇಶದ ಮೂಲ ನಿವಾಸಿಗಳು. ಆದ್ದರಿಂದ ನಾವು ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎಂದಿದ್ದಾರೆ.
 
ಅಸ್ಪರ್ಶ್ಯರು ದೇಶದ ಮೂಲ ನಿವಾಸಿಗಳು, ದೇಶದಲ್ಲಿ ಬದುಕಲು ಹಕ್ಕಿರುವುದು ದಲಿತರಿಗೆ. ಧರ್ಮ ಒತ್ತಾಯಪೂರ್ವಕ ಅಥವಾ ಒತ್ತಾಯದಿಂದ ಮಾಡುವುದು ಅಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ