ಅಕ್ರಮ ಮರಳು: ತಡೆಯಲು ಹೋದ ನೌಕರನ ಮೇಲೆ ಹಲ್ಲೆ

ಬುಧವಾರ, 16 ಜನವರಿ 2019 (15:08 IST)
ಅಕ್ರಮ ಮರಳು ದಂಧೆಯನ್ನು ತಡೆಯಲು ಹೋದ ನೌಕರನ ಮೇಲೆ ಹಲ್ಲೆ ನಡೆಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಲೂರು ಗ್ರಾಮ ಸಹಾಯಕನ ಮೇಲೆ ಹಲ್ಲೆ ನಡೆದಿದೆ. ಈರನಾಯಕ ಹಲ್ಲೆಗೊಳಗಾದ ಗ್ರಾಮ ಸಹಾಯಕನಾಗಿದ್ದಾನೆ. ಗಾಯಾಳುವನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಆಲೂರು ಬಳಿ ತೊರೆಯಲ್ಲಿ ಮರಳು ಸಾಗಾಣೆ ತಡೆಯಲು ಹೋದಾಗ ಘಟನೆ ನಡೆದಿದೆ. ಆಲೂರು ಗ್ರಾಮದ ರವಿ ಹಾಗೂ ಬಜ್ಜಪ್ಪ ಹಲ್ಲೆ ಮಾಡಿದವರು ಎಂದು ದೂರಲಾಗಿದೆ.

ನಿನ್ನೆ ರಾತ್ರಿ ಆಲೂರು ಗ್ರಾಮದ ತೊರೆಯಲ್ಲಿ ನಡೆದ ಘಟನೆ ಇದಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನೂ ಅಬ್ಬಿನಹೊಳೆ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ