ಸ್ಥಳೀಯ ಚುನಾವಣೆ: ಪ್ರಚಾರದಲ್ಲಿ ಕೆಪಿಎನ್

ಮಂಗಳವಾರ, 28 ಆಗಸ್ಟ್ 2018 (15:57 IST)
ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಪಿ.ನಂಜುಂಡಿ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಪಿ.ನಂಜುಂಡಿ ಮಂಡ್ಯದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಂಡ್ಯ ನಗರಸಭೆ ಅಭ್ಯರ್ಥಿ ಗಳ ಪರ ಅಬ್ಬರದ ಪ್ರಚಾರ ನಡೆಸಿದ ನಂಜುಂಡಿ,  ನಗರದ ವಿವಿಧ ವಾರ್ಡುಗಳಲ್ಲಿ  ಪ್ರಚಾರ ನಡೆಸಿದ್ರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ. ನಂಜುಂಡಿ, ಕಾಂಗ್ರೆಸ್ ಪಕ್ಷ ನನ್ನನ್ನು ನಂಬಿ ಕತ್ತು ಕುಯ್ದಿದೆ. ಆದ್ದರಿಂದ ಬಿಜೆಪಿ ಪಕ್ಷ  ನಮಗೆ ಪಕ್ಷ ಸೇರಿದ ಮೂರೇ ದಿನದಲ್ಲಿ ಹಿಂದುಳಿದ ವರ್ಗ ಅಧ್ಯಕ್ಷನನ್ನಾಗಿ ಮಾಡಿ, ಎಂ.ಎಲ್‌.ಸಿ ಮಾಡಿದೆ. ನಮ್ಮ ಹಿಂದುಳಿದ ವರ್ಗ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದ್ರು. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಪಾಠ ಕಲಿಸಬೇಕೆಂದು ಕಾರ್ಯಕರ್ತರು, ಮತದಾರರಿಗೆ ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ