ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಪ್ರೇಮಿಗಳು

ಬುಧವಾರ, 2 ನವೆಂಬರ್ 2016 (18:05 IST)
ವಿವಾಹಿತೆ ಮತ್ತು ಯುವಕನೊಬ್ಬನ ಪ್ರೀತಿ ಸಾವಿನಲ್ಲಿ ಕೊನೆಗೊಂಡ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ಬುಧವಾರ ನಡೆದಿದೆ.
 
ಮೃತ ಅರುಣ್ ಕುಮಾರ್ (21) ಮತ್ತು ವಿಜಯಲಕ್ಷ್ಮಿ (24) ಮೂಲತಃ ಬೆಂಗಳೂರಿನವರಾಗಿದ್ದು ಹಾಸನದ ಲಾಡ್ಜ್‌ನಲ್ಲಿ ಬದುಕಿಗೆ ಕೊನೆ ಹಾಡಿದ್ದಾರೆ. 
 
ಇವರಿಬ್ಬರು ನಗರದ ದೊಮ್ಮಲೂರು ಬಡಾವಣೆಯ ನಿವಾಸಿಗಳಾಗಿದ್ದು ಹಲವು ತಿಂಗಳಿಂದ ಪರಷ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ನಾಪತ್ತೆಯಾಗಿದ್ದು ಇಂದು ಹಾಸನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 
 
ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ವಿಜಯಲಕ್ಷ್ಮಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಅರುಣ್ ಅವಿವಾಹಿತನಾಗಿದ್ದಾನೆ
 
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಹಾಸನ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ