ಆದಿಚುಂಚನಗಿರಿ ಮಠಕ್ಕೆ ಮಂಡ್ಯ ನೂತನ ಸಂಸದ ಭೇಟಿ

ಬುಧವಾರ, 7 ನವೆಂಬರ್ 2018 (14:53 IST)
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ನೂತನ ಸಂಸದ ಎಲ್.ಆರ್.ಶಿವರಾಮೇಗೌಡ ಭೇಟಿ ನೀಡಿದರು.

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿಕೆ ನೀಡಿದ್ದು, ನನ್ನ ವಿದ್ಯಾಭ್ಯಾಸ ಪ್ರಾರಂಭ ಆಗಿದ್ದೆ ಮಠದಲ್ಲಿ. ಯಾವುದೇ ಕೆಲಸಕ್ಕೂ ಮಠದ ಆಶಿರ್ವಾದ ಪಡೆಯುತ್ತೇನೆ. ನಾಮಪತ್ರ ಸಲ್ಲಿಕೆಯಿಂದಲೂ ಮಠಕ್ಕೆ ಬಂದು ಪೂಜೆ ಸಲ್ಲಿಸಿ ದೇವರಲ್ಲಿ ಬೇಡಿಕೊಂಡಿದ್ದೇನೆ. ಇತಿಹಾಸದಲ್ಲಿ ನನಗೆ ಹೆಚ್ಚು ಮತ ಕೊಟ್ಟಿದ್ದಾರೆ ಎಂದರು.

ಹರಕೆ ಹೊತ್ತಿದ್ದೆ. ನನಗೆ ಅಧಿಕಾರ ಇಲ್ಲ ಹರಸು ಎಂದು ಕೇಳಿಕೊಂಡಿದ್ದೆ. ಇವತ್ತು ಅಧಿಕಾರ ಸಿಕ್ಕಿದೆ. ಜನರ ವಿಶ್ವಾಸ ಉಳಿಕೊಂಡು ಕೆಲಸ ಮಾಡುವ ಶಕ್ತಿ ನೀಡುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು. ಮಠಕ್ಕೆ ಎಲ್ಲ ಜನಾಂಗದವರು, ಎಲ್ಲ ಪಕ್ಷದವರೂ ಬರುತ್ತಾರೆ. ಆದರೆ ಕೆಲವರು ಮಠದ ಬಗ್ಗೆ ಗುಲ್ಲೆಬ್ಬಿಸುತ್ತಾರೆ ಎಂದೂ ಹೇಳಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ