ಚಿತ್ರದುರ್ಗ ಮುರುಘಾಶ್ರೀಗಳ ವಿರುದ್ಧ ಟೀಕೆ

ಮಂಗಳವಾರ, 6 ನವೆಂಬರ್ 2018 (15:39 IST)
ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾಶ್ರಿಗಳ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಪ್ರಸನ್ನ ಧರ್ಮ ಜಾಗೃತಿ ಕುಮಾರ ಎಂಬ ಪೇಜ್ ನಲ್ಲಿ ಚಿತ್ರದುರ್ಗದಲ್ಲಿ ಮದಕರಿ ವಂಶಸ್ಥರಿಂದ ಮುರುಘಾಮಠ ನಿರ್ಮಾಣವಾಗಿದೆ. ಆದ್ರೆ ಅದೇ ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ಸ್ಥಾಪಿಸಲಾಗಿದೆ.

ಮದಕರಿ ನಾಯಕರನ್ನು ಕೊಂದಂತಹ ಹೈದರಲಿ ಪುತ್ರ ಟಿಪ್ಪು ಮೂರ್ತಿ ಸ್ಥಾಪಿಸಲಾಗಿದೆ. ಹೀಗಾಗಿ ಹಿಂದೂಗಳು ಇಂತಹ ಕಳ್ಳ ಸ್ವಾಮಿಗಳನ್ನ ಒದ್ದು ಓಡಿಸಿ. ನಾವು ಹಾಕಿದ ದಾನದಿಂದ ತಿಂದು ಕಾರಿನಲ್ಲಿ ಓಡಾಡಿಕೊಂಡು ನಮಗೆ ನಮಕ್ ಹರಾಮ್ ಮಾಡ್ತಾರೆ ಎಂದು ಫೇಸ್ ಬುಕ್ ಒಳಗೆ ಭಾಸ್ಕರ್ ಎಸ್ ಬಾಸ್ ಎಂಬ ಹೆಸರಿನ ಅಕೌಂಟ್ ನಿಂದ ಕಮೆಂಟ್ ಗಳಿಂದ ಟೀಕೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ