ಬೆಂಬಲಿಗರಿಗೆ ಟಿಕೆಟ್ ಒದಗಿಸಲು ಮಾತೆ ಮಹಾದೇವಿ ಕಾಂಗ್ರೆಸ್ ಗೆ ಲಾಬಿ

ಭಾನುವಾರ, 15 ಏಪ್ರಿಲ್ 2018 (08:37 IST)
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ ಮೇಲೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಮಾತೆ ಮಹಾದೇವಿ ಇದೀಗ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿರುವ ವಿಚಾರ ತಿಳಿದುಬಂದಿದೆ.

ಖಾಸಗಿ ವಾಹಿನಿಯೊಂದರ ಪ್ರಕಾರ ಮಾತೆ ಮಹಾದೇವಿ ಬಸವ ಕಲ್ಯಾಣ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಆನಂದ್ ದೇವಪ್ಪಗೆ ಟಿಕೆಟ್ ಕೊಡಿಸಲು ಒತ್ತಾಯ ಮಾಡಿದ್ದಾರಂತೆ.

ಈ ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರೇ ಹೆಚ್ಚಿರುವ ಕಾರಣ ಲಿಂಗಾಯತರಿಗೇ ಟಿಕೆಟ್ ಕೊಡಿಸಬೇಕೆಂದು ಮಾತೆ ಮಹಾದೇವಿ ಪಟ್ಟು ಹಿಡಿದಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ