ಧೃವನಾರಾಯಣ್ ನಿಧನಕ್ಕೆ ಎಂ ಬಿ ಪಾಟೀಲ್ ಸಂತಾಪ

ಶನಿವಾರ, 11 ಮಾರ್ಚ್ 2023 (16:56 IST)
ಮಾಜಿ‌ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಯಣ್ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
 
ಈ ವೇಳೆ ಮಾತನಾಡಿದ ಎಂಬಿ ಪಾಟೀಲ್ ನಮಗೆ ಆಘಾತ ಆಗಿದೆ, ಊಹೆ ಮಾಡಲು ಸಾಧ್ಯವಿಲ್ಲ.ಸಜ್ಜನ ರಾಜಕಾರಣಿ, ಸೃಜನಶೀಲ ವ್ಯಕ್ತಿ.ಶಾಸಕರಾಗಿ ಬದ್ದತೆಯಿಂದ ಕೆಲಸ ಮಾಡಿದ್ದಾರೆ.ಲೋಕಸಭೆಯಲ್ಲೂ ಜಿಲ್ಲೆ ರಾಜ್ಯದ ಹಿತಾಸಕ್ತಿಗಾಗಿ ಬದ್ದತೆಯಿಂದ ಕೆಲಸ ಮಾಡಿದ್ದಾರೆ ಎಂದು ಧೃವನಾರಾಯಣ್ ರವರನ್ನ ನೆನೆದು ಎಂ ಬಿ ಪಾಟೀಲ್ ಬಾವುಕರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ