MES ಪುಂಡರ ಪುಂಡಾಟಕ್ಕೆ ತಡೆ

ಮಂಗಳವಾರ, 1 ನವೆಂಬರ್ 2022 (16:37 IST)
ಕುಂದಾನಗರಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ವಿರುದ್ಧ, MES ಕರಾಳ ದಿನಾಚರಣೆ ನಡೆಸಿದೆ. MES ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದೆ. ಕಪಿಲೇಶ್ವರ ಸಮೀಪದ ಸಂಭಾಜೀ ಮೈದಾನದಿಂದ ಮೆರವಣಿಗೆ ಪ್ರಾರಂಭ ಮಾಡಿದ್ರು. ಕಪ್ಪು ಪಟ್ಟಿ ಕಟ್ಟಿಕೊಂಡು, ಕಪ್ಪು ಬಾವುಟ ಹಾಕಿಕೊಂಡು ಮೆರವಣಿಗೆ ನಡೆಸಿದ್ರು. MES ಮುಖಂಡ ಶುಭಂ ಶಳ್ಕೆ, ಮಾಜಿ ಶಾಸಕ ಮನೋಹರ ಕಿನ್ನೇಕರ್, ಕಿರಣ ಠಾಕೂರ್ ನೇತೃತ್ವದಲ್ಲಿ ಕರಾಳ ದಿನ ಆಚರಣೆ ನಡೆಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 200ಕ್ಕಿಂತಲೂ ಅಧಿಕ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ