ಡಿಸಿಎಂ ಆಗುವೆ ಎಂದ ಸಚಿವ ; ಬಿಜೆಪಿಯಲ್ಲಿ ಹೊಸ ಸಂಚಲನ

ಗುರುವಾರ, 30 ಜನವರಿ 2020 (20:15 IST)
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭಗೊಂಡಿರುವಂತೆ ಒಂದು ಕಡೆ ಸಚಿವ ಸ್ಥಾನ ಆಕಾಂಕ್ಷಿಗಳು, ಮತ್ತೊಂದು ಕಡೆ ಡಿಸಿಎಂ ಹುದ್ದೆಗಳಿಗೆ ಆಕಾಂಕ್ಷಿಗಳು ಲಾಬಿ ಶುರುವಿಟ್ಟುಕೊಂಡಿದ್ದಾರೆ.

ಬಿಜೆಪಿ ಹೈಕಮಾಂಡ್ ಬಯಸಿದರೆ ತಾವು ಉಪಮುಖ್ಯಮಂತ್ರಿ ಆಗೋಕೆ ಸಿದ್ಧ. ಹೀಗಂತ ಸಚಿವ ಬಿ.ಶ್ರೀರಾಮುಲು ಹೇಳಿಕೊಂಡಿದ್ದಾರೆ.

ಡಿಸಿಎಂ ಹುದ್ದೆಗಳನ್ನು ಹೊಸದಾಗಿ ಮಾಡೋದಿಲ್ಲ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿರೋ ಹೇಳಿಕೆಗೆ ಪ್ರತಿಕ್ರಿಯಿಸಿದಿ ರಾಮುಲು, ಡಿಸಿಎಂ ಹುದ್ದೆಗಳ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಪಕ್ಷದ ವರಿಷ್ಠರು ಹೇಳಿದ್ದನ್ನು ಕೇಳೋದಷ್ಟೇ ನಮ್ಮ ಕೆಲಸ ಅಂತ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ