ಕಾರಜೋಳಗೆ ಖಡಕ್ ವಾರ್ನಿಂಗ್ ನೀಡಿದ ಸಚಿವ

ಭಾನುವಾರ, 12 ಮೇ 2019 (14:05 IST)
ಬರ ಮರೆತು ರೆಸಾರ್ಟ್ ನಲ್ಲಿದ್ದಾರೆ ಎಂಬ ಬಿಜೆಪಿಯ ಗೋವಿಂದ ಕಾರಜೋಳ ಹೇಳಿಕೆಗೆ ಸಚಿವರು ಖಡಕ್ಕಾಗಿ ಖಂಡಿಸಿದ್ದಾರೆ.

ಗೋವಿಂದ ಕಾರಜೋಳ ಹಿರಿಯ ರಾಜಕಾರಣಿ ಇದ್ದಾರೆ. ಅವರ ಹೇಳಿಕೆಗಳು ಇತಿಮಿತಿಯಲ್ಲಿರಲಿ.

ಅವರು ಈಗ ಚುನಾವಣಾ ಪ್ರಚಾರದಲ್ಲಿದ್ದಾರೆ. ಹಾಗಾದರೆ ಅವರು ಎಲ್ಲಿ ಉಳಿದುಕೊಳ್ಳುತ್ತಾರೆಂದು ಪ್ರಶ್ನೆ ಮಾಡಿದ್ರು.
ಗೋವಿಂದ ಕಾರಜೋಳಗೆ ತಿರುಗೇಟು ನೀಡಿದ್ದಾರೆ ಸಚಿವ ಸಾ. ರಾ. ಮಹೇಶ್.

ಮೇ 23 ರ ನಂತರ ರಾಜ್ಯದಲ್ಲಿ ಕ್ರಾಂತಿ ಆಗಿಬಿಡುತ್ತದೆ ಎಂದು ಕಾರಜೋಳ ಹೇಳಿದ್ದಾರೆ. ಆದ್ರೆ ದೇಶದಲ್ಲಿ ಕ್ರಾಂತಿ ಆಗುತ್ತೆ. ಅದು ಬಿಜೆಪಿ ಸರ್ಕಾರ ಬದಲಾಗುತ್ತದೆ. ಹೀಗಂತ ರೆಸಾರ್ಟ್ ನಿಂದ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ ಸಾ. ರಾ. ಮಹೇಶ್.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ