ಸಚಿವ ಶಿವಳ್ಳಿ ಇನ್ನಿಲ್ಲ

ಶುಕ್ರವಾರ, 22 ಮಾರ್ಚ್ 2019 (15:41 IST)
ರಾಜ್ಯದ ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1.30ರ ಹೊತ್ತಿಗೆ ನಿಧನರಾದರು.

ಕುಂದಗೋಳ ಶಾಸಕರಾಗಿದ್ದ ಸಿ.ಎಸ್.ಶಿವಳ್ಳಿ, ಪೌರಾಡಳಿತ ಖಾತೆಯ ಸಚಿವರಾಗಿದ್ದರು. ಧಾರವಾಡದಲ್ಲಿ ನಡೆದಿದ್ದ ಕಟ್ಟಡ ದುರಂತದ ಸಂದರ್ಭದಲ್ಲಿದ್ದು, ಪರಿಹಾರ ಉಸ್ತುವಾರಿ ನೋಡಿಕೊಂಡಿದ್ದರು.

ಈ ಹಿಂದೆ ಕೂಡ ಶಿವಳ್ಳಿಯವರಿಗೆ ಹೃದಯಾಘಾತ ಆಗಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೂರು ಬಾರಿ ಶಾಸಕರಾಗಿದ್ದ ಶಿವಳ್ಳಿ ಅಗಲಿಕೆ, ಅವರ ಕುಟುಂಬ ವರ್ಗ ಹಾಗೂ ಕ್ಷೇತ್ರದ ಜನರಲ್ಲಿ ತುಂಬಾ ನೋವನ್ನುಂಟು ಮಾಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ