ಸಚಿವ ಸಿ.ಎಸ್. ಶಿವಳ್ಳಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಸೋಮವಾರ, 4 ಫೆಬ್ರವರಿ 2019 (11:13 IST)
ಹುಬ್ಬಳ್ಳಿ : ಆರೋಗ್ಯದಲ್ಲಿ ಏರುಪಾರಾಗಿದ್ದ ಹಿನ್ನಲೆಯಲ್ಲಿ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.




ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು, ಕಾರ್ಯಕ್ರಮದ ನಂತರ ಉಪ್ಪಿಟ್ಟು ಸೇವಿಸಿ ವಾಪಾಸಾಗುವಾಗ ವಾಂತಿ ಮಾಡಿಕೊಂಡಿದ್ದಾರೆ.


ತಕ್ಷಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಚಿವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇದುವರೆಗೂ ಸಚಿವರ ಅನಾರೋಗ್ಯದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇವರ ಜೊತೆಗೆ ಸಚಿವರ ಗನ್ ಮ್ಯಾನ್, ಅವರ ಆಪ್ತ ಕಾರ್ಯದರ್ಶಿ ಸೇರಿ ನಾಲ್ವರಿಗೆ ವಾಂತಿ ಆಗಿದ್ದು, ಅವರೆಲ್ಲರೂ ಕೂಡ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ