ಬೊಮ್ಮಾಯಿ ಬದಲಾವಣೆ ವದಂತಿ ಬಗ್ಗೆ ಸಚಿವ ಸೋಮಣ್ಣ ಕಾಂಗ್ರೆಸ್ ಮೇಲೆ ಗರಂ

ಬುಧವಾರ, 10 ಆಗಸ್ಟ್ 2022 (19:58 IST)
ಸಿಎಂ ಬದಲಾವಣೆ ಕೂಗು ಜೋರಾಗಿದ್ದು, ಬೊಮ್ಮಾಯಿ ಬದಲಾವಣೆ ವದಂತಿ ಬಗ್ಗೆ ಸಚಿವ ಸೋಮಣ್ಣ ಕಾಂಗ್ರೆಸ್ ಮೇಲೆ ಗರಂ ಆಗಿದ್ದಾರೆ. ಕಾಂಗ್ರೆಸ್ಸಿನವರು ಸುಳ್ಳಿನ ಭವನ ಕಟ್ಟುತ್ತಾ ಇದ್ದಾರೆ. ಹತ್ತು ವರ್ಷ ಅಧಿಕಾರದಿಂದ ದೂರ ಇರಿ ಅಂದ್ರೆ, ಅವರಿಗೆ ಹತ್ತು ದಿನ ಅಧಿಕಾರ ಇಲ್ಲದೇ ಇರೋಕೆ ಆಗ್ತಾ ಇಲ್ಲ. ಬೊಮ್ಮಾಯಿಯವರ ಕಾರ್ಯವೈಖರಿ ನೋಡಿ ಕಾಂಗ್ರೆಸ್​ಗೆ ಭ್ರಮಾನಿರಸನವಾಗಿದೆ. ಕಾಂಗ್ರೆಸ್​ಗೆ ಮಾತಾಡೋಕೆ ಬೇರೆ ಯಾವುದೇ ವಿಷಯ ಇಲ್ಲ, ಹಾಗಾಗಿ ಹೀಗೆ ಮಾತಾಡ್ತಾ ಇದ್ದಾರೆ. ಈ ರೀತಿ ಅಪಪ್ರಚಾರ ಮಾಡ್ತಾ ಇದ್ರೆ ಕಾಂಗ್ರೆಸ್​​​​​ಗೆ ನಷ್ಟವಾಗುವುದು, ನಮಗೇನೂ ನಷ್ಟ ಇಲ್ಲ. ಕಾಂಗ್ರೆಸ್ ನಾಯಕರಿಗೆ ಇನ್ನಾದರೂ ಒಳ್ಳೆಯ ಬುದ್ದಿ ಕೊಡಲಿ ಎಂದು ವ್ಯಂಗ್ಯ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ