ಬೆಂಗಳೂರು: ಐಪಿಎಲ್ 2025 ಫೈನಲ್ ಗೆದ್ದು ಬೆಂಗಳೂರಿಗೆ ಬಂದ ಆರ್ ಸಿಬಿ ಆಟಗಾರರಿಗೆ ಸನ್ಮಾನಕ್ಕಿಂತ ಸಚಿವರು, ಅಧಿಕಾರಿಗಳ ಮಕ್ಕಳು, ಮೊಮ್ಮಕ್ಕಳಿಗೆ ಫೋಟೋ, ಆಟೋಗ್ರಾಫ್ ಪಡೆಯುವುದೇ ಮುಖ್ಯವಾದಂತಿತ್ತು.
ಒಟ್ಟಾರೆ ಸನ್ಮಾನದ ವೇದಿಕೆಯಲ್ಲಿ ಆಟಗಾರರನ್ನು ಕೂರಿಸಿಕೊಂಡು ದೊಂಬರಾಟವೇ ನಡೆದಿತ್ತು. ಆಟಗಾರರು ವೇದಿಕೆಯಲ್ಲಿ ಕೂತಿದ್ದರು ಪ್ರೇಕ್ಷಕರಿಗೆ ಅವರನ್ನು ಕಾಣುತ್ತಲೇ ಇರುತ್ತಿರಲಿಲ್ಲ. ಹೀಗಾಗಿ ಆಟಗಾರರನ್ನು ವಿಧಾನಸೌಧಕ್ಕೆ ಕರೆಸಿದ್ದೇ ಪ್ರಭಾವಿಗಳ ಮಕ್ಕಳಿಗೆ ಸೆಲ್ಫೀ, ಆಟೋಗ್ರಾಫ್ ಪಡೆಯುವ ತೆವಲಿಗಾಗಿ ಎಂದು ಸಾರ್ವಜನಿಕರು ಕಟುವಾಗಿ ಟೀಕಿಸಿದ್ದಾರೆ.