ರಮೇಶ್ ಜಾರಕಿಹೊಳಿ ಪಕ್ಷ ಬಿಟ್ರೆ ತಾವು ಪಕ್ಷ ಬಿಡೋದಿಲ್ಲ ಎಂದ ಶಾಸಕ ಪ್ರತಾಪ್ ಗೌಡ

ಶನಿವಾರ, 29 ಡಿಸೆಂಬರ್ 2018 (10:23 IST)
ರಾಯಚೂರು : ಜಾರಕಿಹೊಳಿ ನಮ್ಮ ಸಚಿವರು, ಬಂಧುಗಳು ಎಂದು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.


ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲಿನಿಂದಲೂ ನಾನು ರಮೇಶ್ ಅನ್ನೋನ್ಯವಾಗಿದ್ದೇವೆ. ಮೊದಲಿನಿಂದಲೂ ನಮ್ಮಿಬ್ಬರ ನಡುವೆ ಒಡನಾಟ ಸಂಬಂಧ ಇದೆ. ಬೆಳಗಾವಿ ಅಧಿವೆಶನದ ನಂತರ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂಬುದಾಗಿ ತಿಳಿಸಿದ್ದಾರೆ.


‘ಕಾಂಗ್ರೆಸ್ ನಿಂದ ಜಿಲ್ಲೆಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸಿದ್ದೇವೆ. 3 ಜನ ಶಾಸಕರಾದ್ದಾಗಿಯೂ ನಮಗೆ ಸಚಿವ ಸ್ಥಾನ ಕೊಟ್ಟಿಲ್ಲ. ಹೈದರಾಬಾದ್ ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಗೆ ಅವಕಾಶ ಸಿಕ್ಕಿದೆ. ರಮೇಶ್ ಜಾರಕಿಹೊಳಿ ಪಕ್ಷ ಬಿಟ್ರೆ ತಾವು ಪಕ್ಷ ಬಿಡೋದಿಲ್ಲ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ