'ಮೋದಿ ಸಾಬ್ ಭಾಷಣ್‌‌ ಸೇ ರೇಷನ್ ನಹಿ ಮಿಲ್ತಿ'

ಮಂಗಳವಾರ, 7 ಮೇ 2019 (19:25 IST)
ಪ್ರಧಾನಿ ವಿರುದ್ಧ ಕಾಂಗ್ರೆಸ್ ಕೋಟೆಯಲ್ಲಿ ಮತ್ತೆ ಖರ್ಗೆ ಟೀಕೆಗಳ ಮಳೆ ಸುರಿಸಿದ್ದಾರೆ.

ಕಲಬುರಗಿ ಜಿಲ್ಲೆ ಚಂದನಕೇರಾ ಗ್ರಾಮದಲ್ಲಿ ಕೈ ಕಾರ್ಯಕರ್ತದ ಸಮಾವೇಶದಲ್ಲಿ ಮಾತನಾಡಿದ ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ರು.

'ಮೋದಿ ಸಾಬ್ ಭಾಷಣ್‌‌ ಸೇ ರೇಷನ್ ನಹಿ ಮಿಲ್ತಿ' ಎಂದು ಜರಿದರು.  

ಮೋದಿ ಪ್ರಧಾನಿ ಆದ ಮೇಲೆ ಬರೀ ಭಾಷಣದಿಂದಲೇ ಜನರ ಹೊಟ್ಟೆ ತುಂಬಿಸ್ತಿದಾರೆ. ಜನಪರ ಕೆಲಸ ಮಾಡಿದಾಗ ಮಾತ್ರ ಬಡವರ ಹೊಟ್ಟೆ ತುಂಬುತ್ತೆ ಎಂದರು.

2014 ರ ಚುನಾವಣೆಗೂ ಮುನ್ನ ನೀಡಿದ ವಾಗ್ದಾನದಂತೆ ಮೋದಿ ಕೆಲಸ ಮಾಡಿಲ್ಲ ಎಂದ ಅವರು, ಬಿಜೆಪಿ ಸೇರಿದ ಉಮೇಶ್ ಜಾಧವ್ ತಮ್ಮನ್ನ ತಾವು ಮಾರಾಟ ಮಾಡಿಕೊಂಡಿದ್ದಾರೆ. ಆ ಮೂಲಕ ಜನರನ್ನ ಸಂಕಷ್ಟಕ್ಕೆ ಈಡು ಮಾಡಿದ್ದಾರೆ ಎಂದು ಟೀಕೆ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ