ಕಬ್ಬು ಬೆಳೆಗಾರರಿಂದ ಮುಧೋಳ್ ಬಂದ್

ಶುಕ್ರವಾರ, 16 ನವೆಂಬರ್ 2018 (18:54 IST)
ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಪಡಿಸುವಂತೆ ಆಗ್ರಹ ಮಾಡಿ ರೈತರು ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಬಂದ್ ಗೆ ಕರೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ಬಂದ್ ಕರೆ ನೀಡಲಾಗಿತ್ತು. ಕಬ್ಬು ಬೆಳೆಗಾರರಿಂದ ಬಂದ್ ಕರೆ  ನೀಡಲಾಗಿತ್ತು.

ನಗರದಲ್ಲಿ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು. ಚಲಿಸಲು ಮುಂದಾದ ಬಸ್ ಮುಂದೆ ಕುಳಿತ ರೈತರು ಪ್ರತಿಭಟನೆ ನಡೆಸಿದರು. ಹೀಗಾಗಿ  ಬಸ್ ಸಂಚಾರ, ಖಾಸಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ರಸ್ತೆಗೆ ವಾಹನಗಳು ಇಳಿಯದ ಪರಿಣಾಮ ರಸ್ತೆಗಳು ಬಿಕೊ ಎನ್ನುತ್ತಿದ್ದವು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ