ಸ್ಯಾಂಟ್ರೋ ರವಿ ಯಾರು ಎಂದ ಮುನಿರತ್ನ

ಶನಿವಾರ, 7 ಜನವರಿ 2023 (19:34 IST)
ಸ್ಯಾಂಟ್ರೋ ರವಿ ಯಾರು.. ಅವನ ಮುಖ ಕೂಡ ನೋಡಿಲ್ಲ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. ಈ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಸ್ಯಾಂಟ್ರೋ ರವಿ ಯಾರು..? ಹೆಚ್ಡಿ ಕುಮಾರಸ್ವಾಮಿ, ಸ್ಯಾಂಟ್ರೋ ರವಿ ಎಂಬುವವ ಬಾಂಬೆಗೆ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಸ್ಯಾಂಟ್ರೋ ರವಿ ಯಾರು, ಅವನು ಏನೂ ಮಾಡುತ್ತಿದ್ದಾನೆ, ಅವನ ಮುಖ ಕೂಡ ನೋಡಿಲ್ಲ, ನನಗೂ ಬಾಂಬೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗ ಬಾಂಬೆ ಹೋಗಲಿಲ್ಲ, ಕುರುಕ್ಷೇತ್ರ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆ. ಕುಮಾರಸ್ವಾಮಿ ಒಬ್ಬರನ್ನು ಇಟ್ಟುಕೊಂಡು ಹಾವು ಬಿಡ್ತಿನಿ ಹಾವು ಬಿಡ್ತಿನಿ ಎಂದು ಹೇಳುತ್ತಾ ಬಂದಿದ್ದಾರೆ , ಅದರಲ್ಲಿ ಏನೂ ಇಲ್ಲ ಬಿಡಿ, ಖಾಲಿ ಬುಟ್ಟಿ ಅದರಲ್ಲಿ ಏನೂ ಇಲ್ಲ ಬಿಡಿ, ಸಮ್ಮಿಶ್ರ ಸರ್ಕಾರ ಏನಾಯ್ತು ಎಂಬುದು ಈಗ ಬೇಡ. ನಮಗೆ ಬಿಜೆಪಿ ಒಳ್ಳೆಯ ಸ್ಥಾನಮಾನ ಕೊಟ್ಟಿದೆ ಸಂತೋಷವಾಗಿ ಇದ್ದೇವೆ, ನಾವು ಯಾವ ಕಾರಣಕ್ಕೂ ಬಿಜೆಪಿ ಬಿಟ್ಟು ಬೇರೆ ಕಡೆ ಹೋಗಲ್ಲ. ಇನ್ನೂ ಕುಮಾರಸ್ವಾಮಿ ಬಳಿ ಬಾಂಬೆ ಪ್ರೆಂಡ್ಸ್ ದು ಅಸ್ಲಿಲ್ ವಿಡಿಯೋ ಇದ್ರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಸಚಿವ ಮುನಿರತ್ನ ಕುಮಾರಸ್ವಾಮಿಗೆ ಸವಾಲ್ ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ