ವಿಚಾರವಾದಿ ನರೇಂದ್ರ ನಾಯಕ್ ಹತ್ಯೆ ಯತ್ನ

ಗುರುವಾರ, 16 ಮಾರ್ಚ್ 2017 (14:55 IST)
ಕಲ್ಬುರ್ಗಿ ಹತ್ಯೆ ಪ್ರಕರಣದ ಬಳಿಕ ರಾಜ್ಯದಲ್ಲಿ ಮತ್ತೊಬ್ಬ ಚಿಂತಕರ ಹತ್ಯೆ ಯತ್ನ ನಡೆದಿದೆ. ಮಂಗಳೂರಿನ ಉರ್ವ ಪ್ರದೇಶದಲ್ಲಿ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಹತ್ಯೆ ಯತ್ನದ ಬಗ್ಗೆ ವರದಿಯಾಗಿದೆ.
 

ನರೇಂದ್ರ ನಾಯಕ್ ಗನ್ ಮ್ಯಾನ್ ಇಲ್ಲದೆ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್`ನಲ್ಲಿ ಬಂದ ಇಬ್ಬರು ಆಗಂತುಕರು ಸಾರ್ ಕಾರಿನ ಟೈರ್ ಪಂಚರ್ ಆಗಿದೆ ಎಂದು ಹೇಳಿ ಕಾರು ನಿಲ್ಲಿಸಲು ಯತ್ನಿಸಿದ್ದಾರೆ. ಅಪಾಯದ ಮನ್ಸೂಚನೆ ಅರಿತ ನರೇಂದ್ರ ನಾಯಕ್ ಮುಂದುವರೆದಿದ್ದಾರೆ.

ಬಳಿಕ, ಉರ್ವ ಪೊಲೀಸ್ ಠಾಣೆಗೆ ಹತ್ಯೆ ಯತ್ಬದ ಬಗ್ಗೆ ದೂರು ನೀಡಿದ್ದಾರೆ. ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ನರೇಂದ್ರ ನಾಯಕ್ ಅವರಿಗೆ ಪೊಲೀಸ್ ಇಲಾಖೆಯಿಂದ ಗನ್ ಮ್ಯಾನ್ ನೀಡಲಾಗಿತ್ತು.

 

ವೆಬ್ದುನಿಯಾವನ್ನು ಓದಿ