ನನ್ನ ಅಪ್ಪ, ಅಮ್ಮ ಕುರುಬರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ-ಸಿಎಂ ಸಿದ್ದರಾಮಯ್ಯ

ಭಾನುವಾರ, 21 ಜನವರಿ 2018 (17:17 IST)
ಬಾಗೇಪಲ್ಲಿ : 'ನಾನೇನು ಅರ್ಜಿ ಹಾಕಿಕೊಂಡು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನಾ? ನನ್ನ ಅಪ್ಪ , ಅಮ್ಮ ಕುರುಬರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ. ಧರ್ಮ, ಜಾತಿ  ಮರೆತು ಮನುಷ್ಯರಾಗಿ ಬದುಕಬೇಕು ಎಂದು ಬಾಗೇಪಲ್ಲಿ ಶಾಸಕ ಸುಬ್ಟಾರೆಡ್ಡಿ ಅವರು ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಸಾಧನಾ ಸಮಾವೇಶವನ್ನು ಏನು ನಮ್ಮ ಖರ್ಚಿನಲ್ಲಿ ಮಾಡಲಿಕ್ಕೆ ಆಗುತ್ತದಾ ? ಅದನ್ನು ಸರ್ಕಾರದ ಹಣದಲ್ಲೆ ಮಾಡುವುದು ಎಂದು  ಬಿಜೆಪಿಯವರ ವಿರುದ್ಧ ಕಿಡಿಕಾರಿದ್ದಾರೆ.


ಇನ್ನು ಹೈಕಮಾಂಡ್ ಗೆ ಕೆಲ ಸಚಿವರು ಕಪ್ಪ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸುಖಾಸುಮ್ಮನೇ ಆರೋಪ ಮಾಡುವ ಬದಲು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ