ಮೈಸೂರು ದಸರಾ: ಈ ಬಾರಿ ಪ್ರವಾಸಿಗರ ಸ್ನೇಹಿ, ಅದ್ದೂರಿ ಆಚರಣೆ ಎಂದ ಸಿಎಂ

ಶುಕ್ರವಾರ, 20 ಜುಲೈ 2018 (15:54 IST)
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಹೀಗಾಗಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಪ್ರವಾಸಿಗರ ಸ್ನೇಹಿ ಹಾಗೂ ಅದ್ದೂರಿ ದಸರಾವನ್ನಾಗಿ ಆಚರಣೆಗೆ ಸಿದ್ದತೆ ನಡೆದಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಂಭ್ರಮದ ಹಾಗೂ ಅದ್ಧೂರಿ ದಸರಾ ಆಚರಣೆಗಾಗಿ ಮೈಸೂರು  ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಾಗಿದೆ. ಬಾರಿ ದಸರಾವನ್ನ ಅದ್ದೂರಿಯಾಗಿ ನಡೆಸುತ್ತೇವೆ ಎಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.  

ತಮಿಳುನಾಡಿಗೆ ಮುಂದಿನ ಸೆಪ್ಟೆಂಬರ್ವರೆಗು ಬಿಡಬೇಕಾದ ನೀರು ಬಿಟ್ಟಿದ್ದೇವೆ. ಬಾರಿಯಂತೂ ತಮಿಳುನಾಡಿಗೆ ನೀರು ಬಿಡುವ ಸಮಸ್ಯೆ ಎದುರಾಗೋದಿಲ್ಲ ಎಂದಿದ್ದಾರೆ.

ಚಾಮುಂಡಿ ದರ್ಶನ ಪಡೆದು, ಬಾಗಿನ ಅರ್ಪಿಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸಾಥ್ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ