ಮೈಸೂರು: ಅಭ್ಯರ್ಥಿಯನ್ನೇ ಥಳಿಸಿದ ಅಪರಿಚಿತ ವ್ಯಕ್ತಿಗಳು

ಗುರುವಾರ, 10 ಮೇ 2018 (15:27 IST)
ಕೆ.ಆರ್.ನಗರ ತಾಲೂಕಿನ ಲಾಲನಹಳ್ಳಿ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿಯಾದ ಹೊಸಹಳ್ಳಿ ವೆಂಕಟೇಶ್ ಪ್ರಚಾರ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. 
ಕತ್ತಲೆಯಲ್ಲಿ ಖಾರದಪುಡಿ ಎರಚಿ ಥಳಿಸಿದ ಇಬ್ಬರು ದುಷ್ಕರ್ಮಿಗಳು. ತಲೆ, ಮೈ- ಕೈಗೆ ರಕ್ತ ಬರುವಂತೆ ಹಲ್ಲೆ ಮಾಡಿದ ದುಷ್ಕರ್ಮಿಗಳು. ಕಾರು ಚಾಲಕ ತಿಲಕ್ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 
 
ಮತ್ತೊಂದು ವಾಹನ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಕೆ.ಆರ್.ನಗರದಲ್ಲಿ ಪರಸ್ಪರ ವೈಷಮ್ಯ ರಾಜಕಾರಣ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ