ಏಕಾಂತ ಬಯಸಿ ಕಾಡಿಗೆ ಬಂದಿದ್ದ ಪ್ರೇಮಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕ್ಯಾತಸಂದ್ರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಂಗಳೂರಿನ ಅತ್ತಿಬೆಲೆಯ ರಾಕೇಶ (22), ಅನ್ಸರ್ಪಾಷ (21) ಹಾಗೂ ತುಮಕೂರಿನ ಹೆಗ್ಗೆರೆಯ ಗಿರೀಶ (19), ಅಂಜನಮೂರ್ತಿ(21) ಹಾಗೂ ನಿತಿನ್ (18) ಎಂದು ಗುರುತಿಸಲಾಗಿದೆ.