ಪ್ರಧಾನಿ ನರೇಂದ್ರಮೋದಿ ವಂಶ ರಾಜಕಾರಣಿಗಳಿಗೆ ಬ್ರೇಕ್

ಗುರುವಾರ, 17 ಮಾರ್ಚ್ 2022 (15:15 IST)
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ವಂಶವಾದಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಲು ಕಾರಣ, ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಈ ಮೂಲಕ ಗುಜರಾತ್, ಕರ್ನಾಟಕ ರಾಜ್ಯಗಳ ಚುನಾವಣೆಗೆ ಎದುರು ನೋಡುತ್ತಿರುವ ಹೊತ್ತಲ್ಲೇ ಪ್ರಾಮುಖ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ, ಪಂಚರಾಜ್ಯ ಚುನಾವಣೆ ವೇಳೆ ವಂಶವಾಹಿ ರಾಜಕಾರಣಕ್ಕೆ ಅವಕಾಶ ನೀಡಿಲ್ಲ. ಇದೀಗ ಮೋದಿ ಹೇಳಿಕೆ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರಲ್ಲೂ ಆತಂಕ ಮನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿಯಲ್ಲಿ ಇಬ್ಬರು, ಮೂವರು ಟಿಕೆಟ್ ಬಯಸುವವರಿಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ. ಜೊತೆಗೆ ತಮಗೆ ಟಿಕೆಟ್ ತಪ್ಪಲಿದೆಯೋ ಎಂಬ ಭಯ ಕೂಡ ಶುರುವಾಗಿದೆ.
 
ಅದರಲ್ಲೂ ಯಡಿಯೂರಪ್ಪ, ಜಾರಕಿಹೊಳಿ, ಶೆಟ್ಟರ್, ರೆಡ್ಡಿ, ನಿರಾಣಿ, ಜೊಲ್ಲೆ, ಅಪ್ಪಚ್ಚು ರಂಜನ್, ರವಿ ಸುಬ್ರಹ್ಮಣ್ಯ ಕುಟುಂಬಗಳಲ್ಲಿ ಟಿಕೆಟ್ ತಪ್ಪುವ ಚಿಂತೆ ಶುರುವಾಗಿದೆ. 2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ತಪ್ಪಬಹುದೆಂಬ ಆತಂಕ ಕಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ