ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ನಾಯಕರ ಹಾದಿ ತಪ್ಪಿಸಲು ಅತೃಪ್ತರಿಂದ ಹೊಸ ಆಟ

ಮಂಗಳವಾರ, 23 ಜುಲೈ 2019 (13:27 IST)
ಮುಂಬೈ : ಅತೃಪ್ತರು ತಂಗಿದ್ದ ಹೋಟೆಲ್ ಮುಂದೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಅತೃಪ್ತರು ಹೊಸ ಆಟವೊಂದನ್ನು ಶುರುಮಾಡಿದ್ದಾರೆ.



ಮೈತ್ರಿ ಸರ್ಕಾರದ ಅಳಿವಿಗೆ ಕಾರಣರಾದ ಅತೃಪ್ತರ ವಿರುದ್ಧ ಸ್ಥಳೀಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿ ಅತೃಪ್ತರು ತಂಗಿದ್ದ ಹೋಟೆಲ್ ಮುಂದೆ ಮಧ್ಯಾಹ್ನ ಪ್ರತಿಭಟನೆಗೆ ನಿರ್ಧಾರ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಹಾದಿ ತಪ್ಪಿಸಲು ಅತೃಪ್ತರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

 

ಮುಂಬೈನಲ್ಲಿದ್ದುಕೊಂಡೇ ಶಾಸಕರ ವಾಸ್ತವ್ಯ ಮುಂಬೈಯಿಂದ ದೆಹಲಿಗೆ ಶಿಫ್ಟ್ ಅನ್ನೋ ವದಂತಿ ಹಬ್ಬಿಸಿ ಈ ಮೂಲಕ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಹಾದಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ