ನಾಳೆ ವಿಶ್ವಾಸಮತಯಾಚನೆ ಹಿನ್ನಲೆ; ಕಾಂಗ್ರೆಸ್ ನಾಯಕರ ಕೈಗೆ ಸಿಗದ ಹಾಗೇ ಅತೃಪ್ತರಿಂದ ಮಾಸ್ಟರ್ ಪ್ಲ್ಯಾನ್

ಭಾನುವಾರ, 21 ಜುಲೈ 2019 (09:58 IST)
ಬೆಂಗಳೂರು : ಸೋಮವಾರ ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಕೈಗೆ ಸಿಗದಿದ್ದ ಹಾಗೇ ಅತೃಪ್ತರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.



ನಾಳೆ ನಡೆಯುವ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚಿಸುವಂತೆ ಸ್ಪೀಕರ್ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಅತೃಪ್ತ ಶಾಸಕರ ಮನವೊಲಿಸುವ ಕಾರ್ಯ ನಡೆಯುವ ಸಾಧ್ಯತೆ ಇದೆ. ಆದ ಕಾರಣ ಅತೃಪ್ತರು ಕಾಂಗ್ರೆಸ್ ನಾಯಕರ ಕೈಗೆ ಸಿಗಬಾರದೆಂದು ಹೋಟೆಲ್ ಗಳಲ್ಲಿ 3 ತಂಡಗಳಾಗಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.


ಮುಂಬೈನ ರಿನೈಸೆನ್ಸ್ ಹೋಟೆಲ್ ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ವಾಸ್ತವ್ಯ ಹೂಡಿದ್ದರೆ, ಬಿಸಿ ಪಾಟೀಲ್ ನೇತೃತ್ವದ ತಂಡ ಪುಣೆಯಲ್ಲಿ ವಾಸ್ತವ್ಯ ಹೂಡಿದೆ. ಹಾಗೇ ಲೋನಾವಾಲಾದಲ್ಲಿ ಎಸ್.ಟಿ.ಸೋಮಶೇಖರ್ ನೇತೃತ್ವದ ತಂಡ ವಾಸ್ತವ್ಯ ಹೂಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ