ಶೀರೂರು ಶ್ರೀಗಳ ಸಾವಿಗೆ ಹೊಸ ವದಂತಿ: ಮೂಲ ಮಠದಲ್ಲಿ ಈಗ ಬಾಟಲಿ ರಹಸ್ಯ

ಭಾನುವಾರ, 22 ಜುಲೈ 2018 (14:25 IST)
ಶೀರೂರು ಶ್ರೀಗಳ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೊಸ ಟ್ವಿಸ್ಟ್​​ ಸಿಕ್ಕಿದೆ. ಅದು ಶೀರೂರು ಮೂಲ ಮಠದಲ್ಲಿ ಸಿಕ್ಕ ಬಾಟಲಿ. ರಹಸ್ಯ ಶೀರೂರು ಮೂಲ ಮಠದಲ್ಲಿ ಒಂದು ಬಾಟಲಿ ಸಿಕ್ಕಿದ್ದು, ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿ ಈಗ ಎಲ್ಲೆಡೆ ಹರಿದಾಡುತ್ತಿದೆ. Morinzhi ಹೆಸರಿನ ಡ್ರಿಂಕ್ ಬಾಟಲಿ ಲಭ್ಯವಾಗಿದ್ದು, ಗೋಡಂಬಿ ಜ್ಯೂಸ್ ಎಂದು ರಮ್ಯಾ ಶೆಟ್ಟಿ ಶ್ರೀಗಳಿಗೆ ಕುಡಿಸಿದ್ದಳು ಎಂಬ ಶಂಕೆ ವ್ಯಕ್ತವಾಗುತ್ತಿದೆ.

 ಆದರೆ ಇದು ಆರೋಗ್ಯ ವೃದ್ಧಿ ಪಾನೀಯದ ಬಾಟಲಿಯಾಗಿದ್ದು, ಗೋಡಂಬಿ ಜ್ಯೂಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾಸ್ತವದಲ್ಲಿ ಅದು ಶಕ್ತಿವರ್ಧಕ ಪಾನೀಯದ ಬಾಟಲ್ಆಗಿದ್ದು, ಸ್ವಾಮೀಜಿಯೇ ರಮ್ಯಾ ಅವರಿಂದ ತರಿಸಿಕೊಂಡು ಪಾನೀಯ ಕುಡಿಯುತ್ತಿದ್ದರು ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ. ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ