ಜೋಡಿ ಹತ್ಯೆ ಪ್ರಕರಣ: ಮಹತ್ವದ ಸುಳಿವು

ಬುಧವಾರ, 28 ಸೆಪ್ಟಂಬರ್ 2016 (06:38 IST)
ವಸಂತನಗರದಲ್ಲಿ ಸೋಮವಾರ ಮುಂಜಾನೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ಹತ್ಯೆ ಬಳಿಕ ಮನೆ ಮಾಲೀಕ, ಉದ್ಯಮಿ ಸಂಪತ್ ರಾಜ್ ಅವರ ರಾಸಾಯನಿಕ  ಉತ್ಪನ್ನಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರು ನಾಪತ್ತೆಯಾಗಿದ್ದಾರೆ. ಹೀಗಾಗಿ ಕೊಲೆ ಹಿಂದೆ ಅವರಿಬ್ಬರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
 
ಹತ್ಯೆ ಹಿಂದೆ ವೈಯಕ್ತಿಕ ದ್ವೇಷ ಮತ್ತು ಹಣಕಾಸಿನ ವಿಚಾರವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ಹತ್ಯೆ ಬಳಿಕವೂ ಪದೇ ಪದೇ ಚುಚ್ಚಿರುವುದು ಇದು ಕೇವಲ ಹಣಕ್ಕಾಗಿ ಮಾತ್ರವಲ್ಲ ವೈಯಕ್ತಿಕ ದ್ವೇಷದಿಂದ ನಡೆದ ಕೃತ್ಯ ಎಂಬುದಕ್ಕೆ ಪುಷ್ಠಿ ದೊರಕಿದೆ.
 
ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಸಂತ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಈ ಘೋರ ಕೃತ್ಯ ನಡೆದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ