ಮುಂದಿನ ವಾರ ಸಭೆ: ಕೋವಿಡ್ ನಿಯಮ ಮತ್ತಷ್ಟು ಕಟ್ಟುನಿಟ್ಟು

ಶುಕ್ರವಾರ, 13 ಆಗಸ್ಟ್ 2021 (14:49 IST)
ಮಂಗಳೂರು: ಅಗಸ್ಟ್ 15ರ ಬಳಿಕ ಬೆಂಗಳೂರಿನಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟು ವಿಚಾರಕ್ಕೆ ಸಂಬಂಧಿಸಿ ಮುಂದಿನ ವಾರ ಬೆಂಗಳೂರಿನಲ್ಲಿ ತಜ್ಞರ ಸಮಿತಿ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನಾವು ತಜ್ಞರ ಸಮಿತಿ ಸಭೆಯನ್ನು ಕಳೆದ ವಾರ ಮಾಡಿದ್ದೇವೆ.14 ದಿನಗಳ ಬಳಿಕ ಮತ್ತೆ ಮಾಡಬೇಕು. ಮುಂದಿನ ವಾರ ಸಭೆ ಮಾಡುತ್ತೇವೆ ಎಂದರು. ಆ ಸಭೆಯಲ್ಲಿ ಗಡಿ ಜಿಲ್ಲೆ ಅಷ್ಟೇ ಅಲ್ಲ, ಬೆಂಗಳೂರು ಸೇರಿದಂತೆ ರಾಜ್ಯದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಕೋವಿಡ್ ನಿಯಂತ್ರಿಸಲು ಕಾಲಕಾಲಕ್ಕೆ ಬದಲಾವಣೆ ಮಾಡುತ್ತೇವೆ. ಯಾವುದೇ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ