ಎತ್ತಿನ ಗಾಡಿ ಮೇಲೆ ರೋಡ್ ಷೋ ನಡೆಸಿದ ನಿಖಿಲ್

ಶನಿವಾರ, 30 ಮಾರ್ಚ್ 2019 (14:29 IST)
ಮಂಡ್ಯದಲ್ಲಿ ಬಿಸಿಲಿಗಿಂತ ಚುನಾವಣೆ ಕಾವು ಜೋರಾಗಿದೆ. ಸಿಎಂ ಪುತ್ರ ಹಾಗೂ ಜೆಡಿಎಸ್ ಅಭ್ಯರ್ಥಿ ಮತ ಕೇಳೋಕೆ ಭರ್ಜರಿ ಕ್ಯಾಂಪೇನ್ ನಡೆಸ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ಭಾಗದಲ್ಲಿ ನಿಖಿಲ್ ಕ್ಯಾಂಪೇನ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೀದಿಗಿಳಿದು ಪ್ರಚಾರಕ್ಕೆ ಮುಂದಾದ ನಿಖಿಲ್ ಗೆ ಜನರ ಬೆಂಬಲ ವ್ಯಕ್ತವಾಗಿದೆ.

ಗ್ರಾಮದ ಬೀದಿ, ಗಲ್ಲಿಗಲ್ಲಿಯಲ್ಲಿ‌ ನಿಖಿಲ್ ಸಂಚಾರ ಮಾಡಿ ಮತಯಾಚನೆ ಮಾಡಿದ್ರು.

ಎತ್ತಿನ ಗಾಡಿ ಮೇಲೆ ಏರಿ ನಿಂತು ರೋಡ್ ಷೋ ನಡೆಸಿದ್ದಾರೆ. ಕೈಮುಗಿದು ಮತ ಭಿಕ್ಷೆ ಕೇಳ್ತಿರೋ ನಿಖಿಲ್ ಕುಮಾರಸ್ವಾಮಿಗೆ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ