ಸಿದ್ಧಗಂಗಾ ಶ್ರೀ ಗೆಲುವಾಗಿದ್ದಾರೆ ಎಂದ ನಿರ್ಮಲಾನಂದ ನಾಥ ಸ್ವಾಮೀಜಿ

ಶುಕ್ರವಾರ, 28 ಡಿಸೆಂಬರ್ 2018 (18:42 IST)
ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮೀಜಿಗಳು ಗೆಲುವಾಗಿದ್ದಾರೆ ಎಂದು ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದ್ದಾರೆ.

ನಿರ್ಮಲಾನಂದ ನಾಥ ಶ್ರೀಗಳು ಹೇಳಿಕೆ ನೀಡಿದ್ದು, ಶ್ರೀಗಳ ದರ್ಶನಕೆ ಬಂದಿದ್ದೇವೆ. ಹಾಸ್ಪಿಟಲ್ ನಲ್ಲಿ ಇದ್ದಾಗ ನೋಡಿದ್ದೆವು. ಪೂಜ್ಯರು ತುಂಬಾ ಗೆಲುವಾಗಿದ್ದಾರೆ. ಎಲ್ಲಾ ಪ್ಯಾರಾಮೀಟರ್ಸ್ ನಾರ್ಮಲ್ ಆಗಿದೆ. ಬಿಪಿ. ಪಲ್ಸ್ ರೇಟ್.  ಆಕ್ಸಿಜನ್ ಸ್ಯಾಚುರೇಷನ್ ನಾರ್ಮಲ್ ಇದೆ ಎಂದರು.

ಯಾವಾಗ ಬಂದ್ರಿ ಚಎನ್ನಾಗಿದ್ದೀರಾ. ಪ್ರಸಾದ ಮಾಡಿಕೊಂಡು ಹೋಗಿ. ಇನ್ನೂ ಸ್ವಲ್ಪ‌ಹೊತ್ತು ಇದ್ದು ಹೋಗಿ ಅಂದ್ರು.
ತಾವು ಹೇಗೀದ್ದೀರಿ ಸ್ವಾಮೀಜಿ  ಅಂತ ನಾವು ಕೇಳಿದೆವು,  'ನಾನ್ ಚನ್ನಾಗಿದ್ದೀನಿ' ಎಂದರು. ಶ್ರೀಗಳು ಗೆಲುವಾಗಿದ್ದಾರೆ. ಸುಸ್ತು ಇರೋದ್ರಿಂದ ಸ್ವಲ್ಪ ವಿಶ್ರಾಂತಿ ಮಾಡ್ತಿದ್ದಾರೆ ಎಂದು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ