ಪರಿಷತ್ ನಲ್ಲಿ ಗಲಾಟೆಯ ವೇಳೆ ಕೊವಿಡ್ ನಿಯಮ ಉಲ್ಲಂಘಿಸಿದ ಸದಸ್ಯರಿಗೆ ದಂಡ ವಿಧಿಸಿ- ಸಚಿವ

ಗುರುವಾರ, 17 ಡಿಸೆಂಬರ್ 2020 (13:05 IST)
ಬೆಂಗಳೂರು : ವಿಧಾನ ಪರಿಷತ್‍ ನಲ್ಲಿ ಸದಸ್ಯರಿಂದ ಗದ್ದಲ, ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

ಪರಿಷತ್ ನಲ್ಲಿ ಗಲಾಟೆಯ ವೇಳೆ ಸದಸ್ಯರು ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದ ಸದಸ್ಯರಿಗೆ ದಂಡ ಹಾಕಬೇಕು. ಈ ಬಗ್ಗೆ ಸಭಾಪತಿ ನಿರ್ಣಯ ತೆಗೆದುಕೊಳ್ಳಬೇಕು. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೂ ದಂಡ ವಿಧಿಸಲೇಬೇಕು  ಎಂದು ಸಚಿವ ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ