ಗ್ರಾ.ಪಂ.ಚುನಾವಣೆ ವೈಷಮ್ಯದ ಹಿನ್ನಲೆ; ಸತೀಶ್ ಜಾರಕಿಹೊಳಿ ಆಪ್ತರ ಮೇಲೆ ಫೈರಿಂಗ್

ಗುರುವಾರ, 17 ಡಿಸೆಂಬರ್ 2020 (12:48 IST)
ಬೆಂಗಳೂರು : ಸತೀಶ್ ಜಾರಕಿಹೊಳಿ ಆಪ್ತರ ಮೇಲೆ ಫೈರಿಂಗ್ ಕೇಸ್ ಗೆ ಸಂಬಂಧಿಸಿದಂತೆ ಗ್ರಾ.ಪಂ.ಚುನಾವಣೆ ವೈಷಮ್ಯದ ಹಿನ್ನಲೆಯಲ್ಲಿ  ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಫೈರಿಂಗ್ ಮಾಡಲಾಗಿದೆ ಎನ್ನಲಾಗಿದೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಿರಣ್, ಭರಮಾ ದೂಪದಾಳೆ ದೇಗುಲಕಟ್ಟೆ ಮೇಲೆ ಕುಳಿತಿದ್ದಾಗ ಮಾಸ್ಕ್ ಹಾಕಿಕೊಂಡು ಬಂದ ಅಪರಿಚಿತರಿಬ್ಬರು ಇವರಿಬ್ಬರ ಮೇಲೆ ಫೈರಿಂಗ್ ಮಾಡಿದ್ದಾರೆ.  

ಈ ಘಟನೆಯಲ್ಲಿ ಭರಮಾ ದೂಪದಾಳೆಗೆ ಗಾಯಗಳಾಗಿದ್ದು, ಕಿರಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ