ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಯಾವೊಬ್ಬ ಹಿಂದೂಗೂ ಉಳಿಗಾಲ ಇಲ್ಲ : ಜಗ್ಗೇಶ್

ಶನಿವಾರ, 6 ಮೇ 2023 (08:04 IST)
ತುಮಕೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವೊಬ್ಬ ಹಿಂದೂಗೆ ಉಳಿಗಾಲ ಇಲ್ಲ. ಹಿಂದೂ ಸಂಸ್ಕೃತಿಗೆ ಉಳಿಗಾಲ ಇಲ್ಲ ಎಂದು ರಾಜ್ಯ ಸಭಾ ಸದಸ್ಯ ಜಗ್ಗೇಶ್ ಹೇಳಿದರು.
 
ತುಮಕೂರು ಪ್ರಚಾರದ ವೇಳೆ ಮಾತನಾಡಿದ ಅವರು, ಕಲ್ಪತರು ನಾಡಿನಲ್ಲಿ ಸಿಂಹ ಘರ್ಜನೆ ಆಗುತ್ತಿದೆ ಇಂದು. ಆ ಸಿಂಹ ಭಾರತದ ಪರವಾಗಿ ಘರ್ಜನೆ ಮಾಡುತ್ತಿದೆ. ಚುನಾವಣೆಯ ಸಮಯದಲ್ಲಿ ಜನರು ಬಹಳ ಪ್ರಜ್ಞಾವಂತಿಕೆಯಿಂದ ತೀರ್ಮಾನ ಮಾಡಬೇಕು, ಮತಹಾಕಬೇಕು ಎಂದು ಹೇಳಿದರು. 

ಚುನಾವಣೆ ವೇಳೆ ಬಹಳ ನಾಟಕ ನಡೀತದೆ. ದೇಶದಲ್ಲಿ ಯಾವುದೇ ಸರಿಯಿಲ್ಲ ಎಂಬ ಕಾಂಗ್ರೆಸ್ ನಾಟಕ ಶುರುವಾಗುತ್ತದೆ. ದೇಶಕ್ಕೆ ಅನೇಕ ಹಗರಣ ಮಾಡಿ ಮೋಸ ಮಾಡಿದ ಕಾಂಗ್ರೆಸ್ ಮೋದಿ ಬಂದಮೇಲೆ, ರಾಷ್ಟ್ರದ ಒಳಗೆ, ಹೊರಗೆ ಭದ್ರವಾಗಿದೆ. ಇಡೀ ಭಾರತದ ಪ್ರತಿಯೊಬ್ಬ ಮನುಷ್ಯನಲ್ಲೂ ಅದ್ಭುತ ನಾಯಕ ಎಂಬ ಛಾಪು ಒತ್ತಿದ್ದಾರೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ