ರಾಘವೇಶ್ವರ ಶ್ರೀಗಳಿಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿಲ್ಲ

ಮಂಗಳವಾರ, 19 ಸೆಪ್ಟಂಬರ್ 2017 (09:11 IST)
ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಆರೋಪಕ್ಕೆ ಯಾವುದೇ ಹುರುಳಿಲ್ಲ ಎಂದು ಶ್ರೀ ಮಠ ಸ್ಪಷ್ಟಪಡಿಸಿದೆ.


ವಿನಾಕಾರಣ ಪ್ರೇಮಲತಾ ದಂಪತಿ ಮಠಾಧೀಶರ ವಿರುದ್ಧ ತಮ್ಮ ಧ್ವೇಷ ಸಾಧಿಸಲು ಈ ರೀತಿ ಸುಳ್ಳು ದೂರು ನೀಡಿದ್ದಾರೆ. ನಾವು ಯಾರ ಬಗ್ಗೆಯೂ ಸೇಡಿನ ಭಾವನೆ ಹೊಂದಿಲ್ಲವೆಂದು ಗೌರಿ ಹತ್ಯೆ ವಿಚಾರಣೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ ಶ್ರೀ ಮಠ ಮನವಿ ಪತ್ರವೊಂದನ್ನು ನೀಡಿದೆ.

ಈ ನಡುವೆ ಗೌರಿ ಹತ್ಯೆಯಲ್ಲಿ ರಾಘವೇಶ್ವರ ಸ್ವಾಮೀಜಿಗಳ ಕೈವಾಡವಿದ್ದರೆ ಪ್ರೇಮಲತಾ ದಂಪತಿಗಳು ತಕ್ಷಣವೇ ದೂರು ನೀಡಬೇಕಿತ್ತು. ಇಷ್ಟು ದಿನ ವಿಳಂಬ ಮಾಡಿದ್ದೇಕೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೆ, ಸುಳ್ಳು ದೂರು ನೀಡಿರುವ ಪ್ರೇಮಲತಾ ದಂಪತಿಯನ್ನೇ ವಿಚಾರಣೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ…  ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ