ಸಿದ್ದರಾಮಯ್ಯ ಅವರ ನಾಟಕ, ಬೂಟಾಟಿಕೆ ಯಾರೂ ನಂಬಲ್ಲ-ಮಾಜಿ ಸಚಿವ ಅಶ್ವಥ್ ನಾರಾಯಣ್

geetha

ಶನಿವಾರ, 13 ಜನವರಿ 2024 (16:22 IST)
ಬೆಂಗಳೂರು-ಸಿಎಂ ಸಿದ್ದರಾಮಯ್ಯ ಅವರು ಒಂದೊಂದು ದಿನ ಒಂದೊಂದು ಹೇಳಿಕೆ ನೀಡ್ತಾರೆ.ನಾನು ದೇವರನ್ನ ನಂಬಲ್ಲ, ನಂಬ್ತೀನಿ.ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ, ಹೋಗಲ್ಲ.ಈ ರೀತಿ ಹಿಂದೂ ಸಂಸ್ಕ್ರತಿ ನಿಲುವಿನ ವಿರುದ್ಧವೇ ನಡೆದುಕೊಳ್ತಾರೆ.ಎಲ್ಲೋ ಒಂದು ಕಡೆ ನಾಟಕ ಮಾಡ್ತಾರೆ.ಜನ ನಮ್ಮ‌ವಿರುದ್ಧ ಹೋಗ್ತಾರೆ ಅಂತ ಹೆದರಿ ಈ ರೀತಿ ಹೇಳಿಕೆ ನೀಡಿದ್ದಾರೆ.ಅಯೋದ್ಯೆಗೆ ಹೋಗಿ ಭೇಟಿ ಕೊಡ್ತೀನಿ ಅಂತ ಹೇಳಿದ್ದಾರೆ ಸ್ವಾಗತ.ಆದ್ರೆ ನಂಬಿಕೆ, ಶ್ರದ್ಧೆ ಇಂದ ಹೋಗಿ.ಹಿಂದೂಗಳ ಬಾವನೆ ಮೇಲೆ ಅಗೌರವ, ಧಕ್ಕೆ ಬರುವಂತೆ ಕಾಂಗ್ರೆಸ್ ನಡೆದುಕೊಳ್ಳಬೇಡಿ.
 
ಸನಾತನ ಧರ್ಮವನ್ನೇ ಮುಗಿಸ್ತೀವಿ ಅಂತಾರೆ, ಅವರ ಮೇಲೆ ಕ್ರಮ ಆಗಲ್ಲ.ನಮ್ಮ ಸರ್ಕಾರದಲ್ಲಿ ರಾಮನಗರದಲ್ಲಿ, ರಾಮಮಂದಿರ ಮರು ಸ್ಥಾಪನೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೆವು.ಬ್ಲೂ ಪ್ರಿಂಟ್ ಕೂಡ ಮಾಡಿದ್ದೆವು.ನಿಮ್ಮ ಸರ್ಕಾರ ಬಂದ ಮೇಲೆ ಮಾಡಲಿಲ್ಲ.ಘೋಷಣೆಯಾಗಿದ್ದನ್ನ ಹಿಂಪಡೆದಿದ್ದಾರೆ.ರಾಮನಗರದಲ್ಲಿ ರಾಮಮಂದಿರ ಬಗ್ಗೆ ಸ್ಥಳೀಯ ಶಾಸಕ ಇಬ್ರಾಹಿಂ ಹಾಗೂ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ.

ರಾಮಮಂದಿರ ನಿರ್ಮಾಣ ಮಾಡ್ತೀವಿ ಅಂತ ಬೂಟಾಟಿಕೆ ಹೇಳಿಕೆ ನೀಡಿದ್ದಾರೆ.ಇದು ನಿಜ ಆದ್ರೆ ಸ್ವಾಗತ.ರಾಮಮಂದಿರ ವಿರುದ್ಧ ಹೇಳಿಕೆ‌ ನೀಡಿದ್ರೆ ಉಲ್ಟಾ ಆಗುತ್ತೆ ಅನ್ನೋ ಭಯ ಇದೆ.ಅಯೋದ್ಯೆ ಉದ್ಘಾಟನೆಗೆ ನಿಮ್ಮ ನಾಯಕರು ಯಾಕೆ ಹೋಗ್ತಿಲ್ಲ.ಸಿದ್ದರಾಮಯ್ಯ ಅವರ ನಾಟಕ, ಬೂಟಾಟಿಕೆ ಯಾರೂ ನಂಬಲ್ಲ.ಯಾರೂ ಕೂಡ ಅವರನ್ನ ಗೌರವಿಸೋದಿಲ್ಲ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ