ಸರ್ವಜನಾಂಗದ ಶಾಂತಿಯ ತೋಟವಲ್ಲ ಕುಡುಕರ ತೋಟ

ಸೋಮವಾರ, 25 ಸೆಪ್ಟಂಬರ್ 2023 (15:20 IST)
ಮದ್ಯದ ಅಂಗಡಿಗಳನ್ನು ಹೆಚ್ಚು ತೆರೆಯಲು ಹೊರಟಿರುವ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಹೆಚ್‌ಡಿಕೆ, ಕಾಂಗ್ರೆಸ್ ಸರ್ಕಾರ ಎಲ್ಲಾ ಭಾಗ್ಯಗಳ ಜೊತೆಗೆ ಮನೆಮನೆಗೂ ಮದ್ಯಭಾಗ್ಯ ನೀಡುತ್ತಿದೆ ಎಂದಿದ್ದಾರೆ. ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿಯಾಗಿದೆ. ಆದ್ರೆ 'ಸರ್ವಜನಾಂಗದ ಶಾಂತಿಯ ತೋಟ'ವನ್ನ ಕಾಂಗ್ರೆಸ್‌, 'ಕರ್ನಾಟಕವನ್ನು ಕುಡುಕರ ತೋಟ'ವನ್ನಾಗಿ ಮಾಡಲಿದೆ ಎಂದು ಟೀಕಿಸಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಕಲ್ಪ, ಸರ್ಕಾರದ ನಡೆಗೆ ನಾಚಿಕೆಗೇಡು. ದವಸ-ಧಾನ್ಯ ಸಿಗುವ ಸೂಪರ್ ಮಾರ್ಕೆಟ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವು ಅಸಹ್ಯದ ಪರಮಾವಧಿ ಎಂದು ಹೆಚ್‌ಡಿಕೆ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ