ಒಂದಲ್ಲ ಒಂದು ದಿನ ದಲಿತರು ಸಿಎಂ ಆಗ್ತಾರೆ-ಸಂಸದ ರಮೇಶ್ ಜಿಗಜಿಣಗಿ

ಶುಕ್ರವಾರ, 15 ಜನವರಿ 2021 (12:11 IST)
ಬೆಂಗಳೂರು : ಒಂದಲ್ಲ ಒಂದು ದಿನ ದಲಿತರು ಸಿಎಂ ಆಗ್ತಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ಎಲ್ಲ ಸಮುದಾಯಕ್ಕೂ ಅವಕಾಶ ಸಿಕ್ಕಿದೆ. ಶೇ.23ರಷ್ಟು ದಲಿತ ಸಮುದಾಯ ಇದೆ. ದಲಿತ ಸಮುದಾಯದವರು ಸಿಎಂ ಯಾಕೆ ಆಗಬಾರ್ದು? ಎಲ್ಲ ಸಮುದಾಯಕ್ಕೂ ಅವಕಾಶ ಸಿಕ್ಕಿದೆ. ಶೇ.23ರಷ್ಟು ದಲಿತ ಸಮುದಾಯ ಇದೆ.  ದಲಿತ ಸಮುದಾಯದವರು ಸಿಎಂ ಯಾಕೆ ಆಗಬಾರ್ದು? ದಲಿತರಿಗೂ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ  ತಿಳಿಸಿದ್ದಾರೆ.

ಯತ್ನಾಳ್ ವಿರುದ್ಧ ಸಂಸದ ಜಿಣಜಿಣಗಿ ಕಿಡಿಕಾರಿದ್ದು, ಯತ್ನಾಳ್ ಬಾಯಿಗೆ ಬಂದಂತೆ ಮಾತಾಡಬಾರ್ದು. ಯಾಕೆ ಈ ರೀತಿ ಮಾತಾಡ್ತಿದ್ದಾರೆ ಗೊತ್ತಿಲ್ಲ. ಮಂತ್ರಿ ಆಗಲಿಲ್ಲ ಎಂಬ ನೋವು ಇರಬಹುದು. ಯತ್ನಾಳ್ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ