ಕೊರೊನಾ ಸೋಂಕಿಗೆ ಕಲಬುರಗಿಯ ವೃದ್ಧ ಬಲಿ; ಆತಂಕ ವ್ಯಕ್ತಪಡಿಸಿದ ಈಶ್ವರ ಖಂಡ್ರೆ

ಶುಕ್ರವಾರ, 13 ಮಾರ್ಚ್ 2020 (11:37 IST)
ಬೆಂಗಳೂರು : ಕೊರೊನಾ ಸೋಂಕಿಗೆ ಕಲಬುರಗಿಯ ವೃದ್ಧ ಬಲಿಯಾಗಿದ್ದಾನೆ. ಇದು ಅತ್ಯಂತ್ ಆಘಾತಕಾರಿ ವಿಷಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿ ಸಾವು ಹಿನ್ನಲೆ ರಾಜ್ಯದಲ್ಲಿ ಭಯದ ವಾತಾವರಣವಿದೆ. ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಆರೋಗ್ಯ ಸಚಿವರ ಹೇಳಿಕೆಯಿಂದ ಉಪಯೋಗವಿಲ್ಲ. ಜಿಲ್ಲೆಗೊಂದು ಕೊರೊನಾ ಸಂಬಂಧ ಪರೀಕ್ಷೆಗೆ ಪ್ರಯೋಗಾಲಯ ತೆರೆಯುವಂತೆ ಆಗ್ರಹಿಸಲಾಗುವುದು. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ